Dịch thuật Kannada - Hamzah Batur

Dịch thuật ý nghĩa Kinh Qur'an

Người dịch Muhammad Hamzah Batur, được phát triển dưới sự giám sát của Trung tâm Dịch thuật Rowad.

QR Code https://quran.islamcontent.com/vi/kannada_hamza

وَٱلسَّمَآءِ ذَاتِ ٱلۡبُرُوجِ

ನಕ್ಷತ್ರ ಪುಂಜಗಳಿರುವ ಆಕಾಶದ ಮೇಲಾಣೆ!

ನಕ್ಷತ್ರ ಪುಂಜಗಳಿರುವ ಆಕಾಶದ ಮೇಲಾಣೆ!

وَٱلۡيَوۡمِ ٱلۡمَوۡعُودِ

ವಾಗ್ದಾನ ಮಾಡಲಾದ ದಿನದ ಮೇಲಾಣೆ!

ವಾಗ್ದಾನ ಮಾಡಲಾದ ದಿನದ ಮೇಲಾಣೆ!

وَشَاهِدٖ وَمَشۡهُودٖ

ಸಾಕ್ಷಿಯಾಗುವುದರ ಮತ್ತು ಸಾಕ್ಷಿ ವಹಿಸಲಾಗುವುದರ ಮೇಲಾಣೆ!

ಸಾಕ್ಷಿಯಾಗುವುದರ ಮತ್ತು ಸಾಕ್ಷಿ ವಹಿಸಲಾಗುವುದರ ಮೇಲಾಣೆ!

قُتِلَ أَصۡحَٰبُ ٱلۡأُخۡدُودِ

ಹೊಂಡದವರು ನಾಶವಾದರು.

ಹೊಂಡದವರು ನಾಶವಾದರು.

ٱلنَّارِ ذَاتِ ٱلۡوَقُودِ

ಅದು (ಹೊಂಡ) ಇಂಧನ ತುಂಬಲಾದ ಬೆಂಕಿಯನ್ನು ಹೊಂದಿತ್ತು.

ಅದು (ಹೊಂಡ) ಇಂಧನ ತುಂಬಲಾದ ಬೆಂಕಿಯನ್ನು ಹೊಂದಿತ್ತು.

إِذۡ هُمۡ عَلَيۡهَا قُعُودٞ

ಅವರು ಅದರ ಸುತ್ತಲೂ ಕುಳಿತಿದ್ದ ಸಂದರ್ಭ.

ಅವರು ಅದರ ಸುತ್ತಲೂ ಕುಳಿತಿದ್ದ ಸಂದರ್ಭ.

وَهُمۡ عَلَىٰ مَا يَفۡعَلُونَ بِٱلۡمُؤۡمِنِينَ شُهُودٞ

ಸತ್ಯವಿಶ್ವಾಸಿಗಳೊಂದಿಗೆ ಏನು ಮಾಡಲಾಗುತ್ತಿತ್ತೋ ಅದಕ್ಕೆ ಅವರು ಪ್ರತ್ಯಕ್ಷದರ್ಶಿಗಳಾಗಿದ್ದರು.

ಸತ್ಯವಿಶ್ವಾಸಿಗಳೊಂದಿಗೆ ಏನು ಮಾಡಲಾಗುತ್ತಿತ್ತೋ ಅದಕ್ಕೆ ಅವರು ಪ್ರತ್ಯಕ್ಷದರ್ಶಿಗಳಾಗಿದ್ದರು.

وَمَا نَقَمُواْ مِنۡهُمۡ إِلَّآ أَن يُؤۡمِنُواْ بِٱللَّهِ ٱلۡعَزِيزِ ٱلۡحَمِيدِ

ಅವರು ಪ್ರಬಲನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರು ಎಂಬುದು ಹೊರತು ಅವರಿಂದ ಪ್ರತೀಕಾರ ಪಡೆಯಲು ಇವರಿಗೆ ಬೇರೆ ಯಾವುದೇ ಕಾರಣವಿರಲಿಲ್ಲ.[1]

[1] ಇಲ್ಲಿ ಹೇಳಲಾಗಿರುವುದು ಹೊಂಡಗಳನ್ನು ತೋಡಿ, ಅವುಗಳಲ್ಲಿ ಸೌದೆಗಳನ್ನು ತುಂಬಿಸಿ ಬೆಂಕಿಯುರಿಸಿ, ನಂತರ ಸತ್ಯವಿಶ್ವಾಸಿಗಳನ್ನು ಅವುಗಳಲ್ಲಿ ಜೀವಂತ ಉರಿಸಿದ ಒಂದು ದುಷ್ಟ ರಾಜ ಮತ್ತು ಅವನ ಅನುಯಾಯಿಗಳ ಬಗ್ಗೆಯಾಗಿದೆ.
ಅವರು ಪ್ರಬಲನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರು ಎಂಬುದು ಹೊರತು ಅವರಿಂದ ಪ್ರತೀಕಾರ ಪಡೆಯಲು ಇವರಿಗೆ ಬೇರೆ ಯಾವುದೇ ಕಾರಣವಿರಲಿಲ್ಲ.[1]

ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۚ وَٱللَّهُ عَلَىٰ كُلِّ شَيۡءٖ شَهِيدٌ

ಅವನು (ಅಲ್ಲಾಹು) ಯಾರೆಂದರೆ ಭೂಮ್ಯಾಕಾಶಗಳ ಸಾರ್ವಭೌಮತ್ವವು ಯಾರಿಗೆ ಸೇರಿದ್ದೋ ಅವನು. ಅಲ್ಲಾಹು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.

ಅವನು (ಅಲ್ಲಾಹು) ಯಾರೆಂದರೆ ಭೂಮ್ಯಾಕಾಶಗಳ ಸಾರ್ವಭೌಮತ್ವವು ಯಾರಿಗೆ ಸೇರಿದ್ದೋ ಅವನು. ಅಲ್ಲಾಹು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.

إِنَّ ٱلَّذِينَ فَتَنُواْ ٱلۡمُؤۡمِنِينَ وَٱلۡمُؤۡمِنَٰتِ ثُمَّ لَمۡ يَتُوبُواْ فَلَهُمۡ عَذَابُ جَهَنَّمَ وَلَهُمۡ عَذَابُ ٱلۡحَرِيقِ

ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ಹಿಂಸೆ ನೀಡುವವರು ಮತ್ತು ಆ ಬಳಿಕ ಪಶ್ಚಾತ್ತಾಪ ಪಡದವರು ಯಾರೋ—ಅವರಿಗೆ ನರಕದ ಶಿಕ್ಷೆಯಿದೆ. ಅವರಿಗೆ ಸುಟ್ಟು ಕರಕಲಾಗುವ ಶಿಕ್ಷೆಯಿದೆ.

ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ಹಿಂಸೆ ನೀಡುವವರು ಮತ್ತು ಆ ಬಳಿಕ ಪಶ್ಚಾತ್ತಾಪ ಪಡದವರು ಯಾರೋ—ಅವರಿಗೆ ನರಕದ ಶಿಕ್ಷೆಯಿದೆ. ಅವರಿಗೆ ಸುಟ್ಟು ಕರಕಲಾಗುವ ಶಿಕ್ಷೆಯಿದೆ.

إِنَّ ٱلَّذِينَ ءَامَنُواْ وَعَمِلُواْ ٱلصَّٰلِحَٰتِ لَهُمۡ جَنَّٰتٞ تَجۡرِي مِن تَحۡتِهَا ٱلۡأَنۡهَٰرُۚ ذَٰلِكَ ٱلۡفَوۡزُ ٱلۡكَبِيرُ

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅದೇ ಅತಿದೊಡ್ಡ ವಿಜಯ.

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅದೇ ಅತಿದೊಡ್ಡ ವಿಜಯ.

إِنَّ بَطۡشَ رَبِّكَ لَشَدِيدٌ

ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಬಹಳ ಕಠೋರವಾಗಿದೆ.

ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಬಹಳ ಕಠೋರವಾಗಿದೆ.

إِنَّهُۥ هُوَ يُبۡدِئُ وَيُعِيدُ

ಅವನೇ ಪ್ರಥಮ ಬಾರಿ ಸೃಷ್ಟಿಸುವವನು ಮತ್ತು ಎರಡನೇ ಬಾರಿ ಸೃಷ್ಟಿಸುವವನು.

ಅವನೇ ಪ್ರಥಮ ಬಾರಿ ಸೃಷ್ಟಿಸುವವನು ಮತ್ತು ಎರಡನೇ ಬಾರಿ ಸೃಷ್ಟಿಸುವವನು.

وَهُوَ ٱلۡغَفُورُ ٱلۡوَدُودُ

ಅವನು ಕ್ಷಮಿಸುವವನು ಮತ್ತು, ಅತಿಯಾಗಿ ಪ್ರೀತಿಸುವವನು.

ಅವನು ಕ್ಷಮಿಸುವವನು ಮತ್ತು, ಅತಿಯಾಗಿ ಪ್ರೀತಿಸುವವನು.

ذُو ٱلۡعَرۡشِ ٱلۡمَجِيدُ

ಅವನು ಸಿಂಹಾಸನದ ಒಡೆಯನು ಮತ್ತು ಪರಮೋನ್ನತನು.

ಅವನು ಸಿಂಹಾಸನದ ಒಡೆಯನು ಮತ್ತು ಪರಮೋನ್ನತನು.

فَعَّالٞ لِّمَا يُرِيدُ

ತಾನು ಬಯಸುವುದೆಲ್ಲವನ್ನೂ ಕಾರ್ಯರೂಪಕ್ಕೆ ತರುವವನು.

ತಾನು ಬಯಸುವುದೆಲ್ಲವನ್ನೂ ಕಾರ್ಯರೂಪಕ್ಕೆ ತರುವವನು.

هَلۡ أَتَىٰكَ حَدِيثُ ٱلۡجُنُودِ

ಸೈನ್ಯಗಳ ಸಮಾಚಾರವು ನಿಮಗೆ ತಲುಪಿದೆಯೇ?

ಸೈನ್ಯಗಳ ಸಮಾಚಾರವು ನಿಮಗೆ ತಲುಪಿದೆಯೇ?

فِرۡعَوۡنَ وَثَمُودَ

ಫರೋಹ‍ ಮತ್ತು ಸಮೂದ್ ಗೋತ್ರದವರ (ಸಮಾಚಾರ).

ಫರೋಹ‍ ಮತ್ತು ಸಮೂದ್ ಗೋತ್ರದವರ (ಸಮಾಚಾರ).

بَلِ ٱلَّذِينَ كَفَرُواْ فِي تَكۡذِيبٖ

ಆದರೆ ಸತ್ಯನಿಷೇಧಿಗಳು ನಿಷೇಧಿಸುತ್ತಲೇ ಇದ್ದಾರೆ.

ಆದರೆ ಸತ್ಯನಿಷೇಧಿಗಳು ನಿಷೇಧಿಸುತ್ತಲೇ ಇದ್ದಾರೆ.

وَٱللَّهُ مِن وَرَآئِهِم مُّحِيطُۢ

ಅಲ್ಲಾಹು ಅವರನ್ನು ಎಲ್ಲಾ ದಿಕ್ಕುಗಳಿಂದ ಆವರಿಸಿಕೊಂಡಿದ್ದಾನೆ.

ಅಲ್ಲಾಹು ಅವರನ್ನು ಎಲ್ಲಾ ದಿಕ್ಕುಗಳಿಂದ ಆವರಿಸಿಕೊಂಡಿದ್ದಾನೆ.

بَلۡ هُوَ قُرۡءَانٞ مَّجِيدٞ

ಆದರೆ ಇದು ಮಹತ್ವಪೂರ್ಣ ಕುರ್‌ಆನ್ ಆಗಿದೆ.

ಆದರೆ ಇದು ಮಹತ್ವಪೂರ್ಣ ಕುರ್‌ಆನ್ ಆಗಿದೆ.

فِي لَوۡحٖ مَّحۡفُوظِۭ

ಇದನ್ನು ಸುರಕ್ಷಿತ ಫಲಕದಲ್ಲಿ ಬರೆದಿಡಲಾಗಿದೆ.

ಇದನ್ನು ಸುರಕ್ಷಿತ ಫಲಕದಲ್ಲಿ ಬರೆದಿಡಲಾಗಿದೆ.