Kannada translation - Hamza Butur
Translated by Muhammad Hamza Batur and developed under the supervision of Rowwad Translation Center
تَبَٰرَكَ ٱلَّذِي بِيَدِهِ ٱلۡمُلۡكُ وَهُوَ عَلَىٰ كُلِّ شَيۡءٖ قَدِيرٌ
ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆಯೋ ಅವನು ಸಮೃದ್ಧಪೂರ್ಣನಾಗಿದ್ದಾನೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ٱلَّذِي خَلَقَ ٱلۡمَوۡتَ وَٱلۡحَيَوٰةَ لِيَبۡلُوَكُمۡ أَيُّكُمۡ أَحۡسَنُ عَمَلٗاۚ وَهُوَ ٱلۡعَزِيزُ ٱلۡغَفُورُ
ಅವನೇ ಮರಣ ಮತ್ತು ಜೀವನವನ್ನು ಸೃಷ್ಟಿಸಿದವನು. ನಿಮ್ಮಲ್ಲಿ ಅತ್ಯುತ್ತಮ ಕರ್ಮವೆಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ. ಅವನು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ.
ٱلَّذِي خَلَقَ سَبۡعَ سَمَٰوَٰتٖ طِبَاقٗاۖ مَّا تَرَىٰ فِي خَلۡقِ ٱلرَّحۡمَٰنِ مِن تَفَٰوُتٖۖ فَٱرۡجِعِ ٱلۡبَصَرَ هَلۡ تَرَىٰ مِن فُطُورٖ
ಅವನೇ ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದವನು. ನೀವು ಪರಮ ದಯಾಮಯನ ಸೃಷ್ಟಿಯಲ್ಲಿ ಯಾವುದೇ ಕುಂದು-ಕೊರತೆಯನ್ನು ಕಾಣಲಾರಿರಿ. ಎರಡನೇ ಬಾರಿ ದೃಷ್ಟಿಯನ್ನು ಮರಳಿಸಿ ನೋಡಿ. ನೀವು ಯಾವುದಾದರೂ ಬಿರುಕುಗಳನ್ನು ಕಾಣುತ್ತೀರಾ?
ثُمَّ ٱرۡجِعِ ٱلۡبَصَرَ كَرَّتَيۡنِ يَنقَلِبۡ إِلَيۡكَ ٱلۡبَصَرُ خَاسِئٗا وَهُوَ حَسِيرٞ
ನಂತರ ಪುನಃ ಎರಡೆರಡು ಬಾರಿ ದೃಷ್ಟಿ ಹಾಯಿಸಿ ನೋಡಿ. ನಿಮ್ಮ ದೃಷ್ಟಿಯು ನಿಮ್ಮ ಬಳಿಗೆ ದಯನೀಯ ಸ್ಥಿತಿಯಲ್ಲಿ ಸುಸ್ತಾಗಿ ಮರಳಿ ಬರುವುದು.
وَلَقَدۡ زَيَّنَّا ٱلسَّمَآءَ ٱلدُّنۡيَا بِمَصَٰبِيحَ وَجَعَلۡنَٰهَا رُجُومٗا لِّلشَّيَٰطِينِۖ وَأَعۡتَدۡنَا لَهُمۡ عَذَابَ ٱلسَّعِيرِ
ನಾವು ಇಹಲೋಕದ ಆಕಾಶವನ್ನು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ. ಅವುಗಳನ್ನು ಶೈತಾನರಿಗೆ ಹೊಡೆದೋಡಿಸುವ ಸಾಧನವಾಗಿ ಮಾಡಿದ್ದೇವೆ. ನಾವು ಅವರಿಗೆ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
وَلِلَّذِينَ كَفَرُواْ بِرَبِّهِمۡ عَذَابُ جَهَنَّمَۖ وَبِئۡسَ ٱلۡمَصِيرُ
ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರಿಗೆ ನರಕ ಶಿಕ್ಷೆಯಿದೆ. ಆ ಗಮ್ಯಸ್ಥಾನವು ಅತಿ ನಿಕೃಷ್ಟವಾಗಿದೆ.
إِذَآ أُلۡقُواْ فِيهَا سَمِعُواْ لَهَا شَهِيقٗا وَهِيَ تَفُورُ
ಅವರನ್ನು ಅದಕ್ಕೆ ಎಸೆಯಲಾದಾಗ ಅವರು ಅದರ ದೊಡ್ಡ ಗರ್ಜನೆಯನ್ನು ಕೇಳುವರು.
تَكَادُ تَمَيَّزُ مِنَ ٱلۡغَيۡظِۖ كُلَّمَآ أُلۡقِيَ فِيهَا فَوۡجٞ سَأَلَهُمۡ خَزَنَتُهَآ أَلَمۡ يَأۡتِكُمۡ نَذِيرٞ
ಅದು (ಕ್ರೋಧದಿಂದ) ಇನ್ನೇನು ಸ್ಫೋಟಿಸುವಂತಿರುವುದು. ಅದಕ್ಕೆ ಒಂದೊಂದು ಗುಂಪನ್ನು ಎಸೆಯುವಾಗಲೆಲ್ಲಾ ಅದರ ಕಾವಲುಗಾರರು ಕೇಳುವರು: “ನಿಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರನು ಬರಲಿಲ್ಲವೇ?”
قَالُواْ بَلَىٰ قَدۡ جَآءَنَا نَذِيرٞ فَكَذَّبۡنَا وَقُلۡنَا مَا نَزَّلَ ٱللَّهُ مِن شَيۡءٍ إِنۡ أَنتُمۡ إِلَّا فِي ضَلَٰلٖ كَبِيرٖ
ಅವರು ಉತ್ತರಿಸುವರು: “ಹೌದು, ನಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು. ನಾವು ಹೇಳಿದೆವು: ಅಲ್ಲಾಹು ಏನನ್ನೂ ಅವತೀರ್ಣಗೊಳಿಸಿಲ್ಲ; ನೀವು ಬಹುದೊಡ್ಡ ದುರ್ಮಾರ್ಗದಲ್ಲಿದ್ದೀರಿ.”
وَقَالُواْ لَوۡ كُنَّا نَسۡمَعُ أَوۡ نَعۡقِلُ مَا كُنَّا فِيٓ أَصۡحَٰبِ ٱلسَّعِيرِ
ಅವರು (ಸತ್ಯನಿಷೇಧಿಗಳು) ಹೇಳುವರು: “ನಾವು ಕಿವಿಗೊಡುತ್ತಿದ್ದರೆ ಅಥವಾ ಅರ್ಥಮಾಡಿಕೊಳ್ಳುತ್ತಿದ್ದರೆ ನಾವು ನರಕವಾಸಿಗಳಲ್ಲಿ ಸೇರುತ್ತಿರಲಿಲ್ಲ.”
فَٱعۡتَرَفُواْ بِذَنۢبِهِمۡ فَسُحۡقٗا لِّأَصۡحَٰبِ ٱلسَّعِيرِ
ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವರು. ಆ ನರಕವಾಸಿಗಳು (ಅಲ್ಲಾಹನ ದಯೆಯಿಂದ) ದೂರವಾಗಲಿ.
إِنَّ ٱلَّذِينَ يَخۡشَوۡنَ رَبَّهُم بِٱلۡغَيۡبِ لَهُم مَّغۡفِرَةٞ وَأَجۡرٞ كَبِيرٞ
ನಿಶ್ಚಯವಾಗಿಯೂ ಅದೃಶ್ಯ ಸ್ಥಿತಿಯಲ್ಲಿ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವರು ಯಾರೋ ಅವರಿಗೆ ಕ್ಷಮೆ ಮತ್ತು ಮಹಾ ಪ್ರತಿಫಲವಿದೆ.
وَأَسِرُّواْ قَوۡلَكُمۡ أَوِ ٱجۡهَرُواْ بِهِۦٓۖ إِنَّهُۥ عَلِيمُۢ بِذَاتِ ٱلصُّدُورِ
ನೀವು ನಿಮ್ಮ ಮಾತನ್ನು ರಹಸ್ಯವಾಗಿರಿಸಿರಿ ಅಥವಾ ಬಹಿರಂಗಪಡಿಸಿರಿ. ನಿಶ್ಚಯವಾಗಿಯೂ ಅವನು ಹೃದಯಗಳೊಳಲ್ಲಿರುವುದನ್ನು ತಿಳಿಯುತ್ತಾನೆ.
أَلَا يَعۡلَمُ مَنۡ خَلَقَ وَهُوَ ٱللَّطِيفُ ٱلۡخَبِيرُ
ಸೃಷ್ಟಿಸಿದವನಿಗೆ ಅದು ತಿಳಿದಿಲ್ಲವೇ? ಅವನು ಅತ್ಯಂತ ನವಿರು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
هُوَ ٱلَّذِي جَعَلَ لَكُمُ ٱلۡأَرۡضَ ذَلُولٗا فَٱمۡشُواْ فِي مَنَاكِبِهَا وَكُلُواْ مِن رِّزۡقِهِۦۖ وَإِلَيۡهِ ٱلنُّشُورُ
ಅವನೇ ನಿಮಗೆ ಭೂಮಿಯನ್ನು ವಿಧೇಯಗೊಳಿಸಿಕೊಟ್ಟವನು. ನೀವು ಅದರ ರಸ್ತೆಗಳಲ್ಲಿ ಚಲಿಸುವುದಕ್ಕಾಗಿ. ಅವನು ಒದಗಿಸಿದ ಉಪಜೀವನದಿಂದ ತಿನ್ನಿರಿ. ಪುನರುತ್ಥಾನವು ಅವನ ಬಳಿಗೇ ಆಗಿದೆ.
ءَأَمِنتُم مَّن فِي ٱلسَّمَآءِ أَن يَخۡسِفَ بِكُمُ ٱلۡأَرۡضَ فَإِذَا هِيَ تَمُورُ
ಆಕಾಶದಲ್ಲಿರುವವನು (ಅಲ್ಲಾಹು) ನಿಮ್ಮನ್ನು ಭೂಮಿಯಲ್ಲಿ ಹುದುಗಿಸಲಾರನೆಂದು ನೀವು ನಿರ್ಭಯವಾಗಿದ್ದೀರಾ? ಆಗ ಅಗೋ ಭೂಮಿ ಓಲಾಡುತ್ತಿರುವುದು.
أَمۡ أَمِنتُم مَّن فِي ٱلسَّمَآءِ أَن يُرۡسِلَ عَلَيۡكُمۡ حَاصِبٗاۖ فَسَتَعۡلَمُونَ كَيۡفَ نَذِيرِ
ಅಥವಾ ಆಕಾಶದಲ್ಲಿರುವವನು (ಅಲ್ಲಾಹು) ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸಲಾರನೆಂದು ನೀವು ನಿರ್ಭಯವಾಗಿದ್ದೀರಾ? ನಂತರ ನನ್ನ ಎಚ್ಚರಿಕೆ ಹೇಗಿತ್ತೆಂದು ನೀವು ಸದ್ಯವೇ ತಿಳಿದುಕೊಳ್ಳುವಿರಿ.
وَلَقَدۡ كَذَّبَ ٱلَّذِينَ مِن قَبۡلِهِمۡ فَكَيۡفَ كَانَ نَكِيرِ
ಅವರಿಗಿಂತ ಮೊದಲಿನವರೂ ನಿಷೇಧಿಸಿದ್ದರು. ಆಗ ಅವರ ಮೇಲೆ ನನ್ನ ಶಿಕ್ಷೆ ಹೇಗಿತ್ತು?
أَوَلَمۡ يَرَوۡاْ إِلَى ٱلطَّيۡرِ فَوۡقَهُمۡ صَٰٓفَّٰتٖ وَيَقۡبِضۡنَۚ مَا يُمۡسِكُهُنَّ إِلَّا ٱلرَّحۡمَٰنُۚ إِنَّهُۥ بِكُلِّ شَيۡءِۭ بَصِيرٌ
ಅವರು ತಮ್ಮ ಮೇಲ್ಭಾಗದಲ್ಲಿ ರೆಕ್ಕೆಗಳನ್ನು ಚಾಚಿ ಹಾರಾಡುವ ಮತ್ತು ರೆಕ್ಕೆಗಳನ್ನು ಮಡಚುವ ಹಕ್ಕಿಗಳನ್ನು ನೋಡಿಲ್ಲವೇ? ಅವುಗಳನ್ನು ಪರಮ ದಯಾಳುವಾದ ಅಲ್ಲಾಹನಲ್ಲದೆ ಇನ್ನಾರೂ ಆಧರಿಸಿ ಹಿಡಿದಿಲ್ಲ. ನಿಶ್ಚಯವಾಗಿಯೂ ಅವನು ಎಲ್ಲವನ್ನೂ ನೋಡುತ್ತಿದ್ದಾನೆ.
أَمَّنۡ هَٰذَا ٱلَّذِي هُوَ جُندٞ لَّكُمۡ يَنصُرُكُم مِّن دُونِ ٱلرَّحۡمَٰنِۚ إِنِ ٱلۡكَٰفِرُونَ إِلَّا فِي غُرُورٍ
ಪರಮ ದಯಾಳುವಾದ ಅಲ್ಲಾಹನ ಹೊರತು ನಿಮಗೆ ಸಹಾಯ ಮಾಡಬಹುದಾದ ಸೈನ್ಯವು ಯಾವುದು? ಸತ್ಯನಿಷೇಧಿಗಳು ಸಂಪೂರ್ಣ ವಂಚನೆಯಲ್ಲಿದ್ದಾರೆ.
أَمَّنۡ هَٰذَا ٱلَّذِي يَرۡزُقُكُمۡ إِنۡ أَمۡسَكَ رِزۡقَهُۥۚ بَل لَّجُّواْ فِي عُتُوّٖ وَنُفُورٍ
ಅಲ್ಲಾಹು ನಿಮಗೆ ಉಪಜೀವನವನ್ನು ತಡೆಹಿಡಿದರೆ, ನಿಮಗೆ ಉಪಜೀವನ ನೀಡಲು ಯಾರಿಗೆ ಸಾಧ್ಯವಿದೆ? ಅಲ್ಲ, ವಾಸ್ತವವಾಗಿ (ಸತ್ಯನಿಷೇಧಿಗಳು) ಸೊಕ್ಕು ಮತ್ತು ವಿದ್ವೇಷದಲ್ಲೇ ನಿರತರಾಗಿದ್ದಾರೆ.
أَفَمَن يَمۡشِي مُكِبًّا عَلَىٰ وَجۡهِهِۦٓ أَهۡدَىٰٓ أَمَّن يَمۡشِي سَوِيًّا عَلَىٰ صِرَٰطٖ مُّسۡتَقِيمٖ
ಹಾಗಾದರೆ ಹೆಚ್ಚು ಸನ್ಮಾರ್ಗದಲ್ಲಿರುವವನು ತಲೆಕೆಳಗಾಗಿ ಮುಖದ ಮೇಲೆ ನಡೆಯುವವನೋ, ಅಥವಾ (ಕಾಲುಗಳ ಮೇಲೆ) ನೇರ ಮಾರ್ಗದಲ್ಲಿ ಸರಿಯಾಗಿ ನಡೆಯುವವನೋ?
قُلۡ هُوَ ٱلَّذِيٓ أَنشَأَكُمۡ وَجَعَلَ لَكُمُ ٱلسَّمۡعَ وَٱلۡأَبۡصَٰرَ وَٱلۡأَفۡـِٔدَةَۚ قَلِيلٗا مَّا تَشۡكُرُونَ
ಹೇಳಿರಿ: “ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಶ್ರವಣ, ದೃಷ್ಟಿ ಹಾಗೂ ಹೃದಯವನ್ನು ನೀಡಿದವನು. ನೀವು ಸ್ವಲ್ಪ ಮಾತ್ರ ಕೃತಜ್ಞರಾಗುತ್ತೀರಿ.”
قُلۡ هُوَ ٱلَّذِي ذَرَأَكُمۡ فِي ٱلۡأَرۡضِ وَإِلَيۡهِ تُحۡشَرُونَ
ಹೇಳಿರಿ: “ಅವನೇ ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿದವನು. ನಿಮ್ಮನ್ನು ಅವನ ಬಳಿಯಲ್ಲೇ ಒಟ್ಟುಗೂಡಿಸಲಾಗುವುದು.”
وَيَقُولُونَ مَتَىٰ هَٰذَا ٱلۡوَعۡدُ إِن كُنتُمۡ صَٰدِقِينَ
ಅವರು ಕೇಳುತ್ತಾರೆ: “ಈ ವಾಗ್ದಾನವು ಸತ್ಯವಾಗುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ (ಹೇಳಿರಿ).”
قُلۡ إِنَّمَا ٱلۡعِلۡمُ عِندَ ٱللَّهِ وَإِنَّمَآ أَنَا۠ نَذِيرٞ مُّبِينٞ
ಹೇಳಿರಿ: “ಆ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ. ನಿಶ್ಚಯವಾಗಿಯೂ ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರವಾಗಿದ್ದೇನೆ.”
فَلَمَّا رَأَوۡهُ زُلۡفَةٗ سِيٓـَٔتۡ وُجُوهُ ٱلَّذِينَ كَفَرُواْ وَقِيلَ هَٰذَا ٱلَّذِي كُنتُم بِهِۦ تَدَّعُونَ
ಅವರು ಆ ವಾಗ್ದಾನವು ಸಮೀಪದಲ್ಲಿರುವುದನ್ನು ಕಾಣುವಾಗ, ಸತ್ಯನಿಷೇಧಿಗಳ ಮುಖಗಳು ಬಿಳಿಚಿಕೊಳ್ಳುವುದು. (ಅವರೊಡನೆ ಹೇಳಲಾಗುವುದು): “ಇದೇ ನೀವು ಬೇಡುತ್ತಿದ್ದ ಆ ಶಿಕ್ಷೆ.”
قُلۡ أَرَءَيۡتُمۡ إِنۡ أَهۡلَكَنِيَ ٱللَّهُ وَمَن مَّعِيَ أَوۡ رَحِمَنَا فَمَن يُجِيرُ ٱلۡكَٰفِرِينَ مِنۡ عَذَابٍ أَلِيمٖ
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನನ್ನನ್ನು ಮತ್ತು ನನ್ನ ಅನುಯಾಯಿಗಳನ್ನು ನಾಶ ಮಾಡಿದರೆ, ಅಥವಾ ನಮಗೆ ದಯೆ ತೋರಿದರೆ, ಸತ್ಯನಿಷೇಧಿಗಳನ್ನು ಯಾತನಾಮಯ ಶಿಕ್ಷೆಯಿಂದ ಪಾರು ಮಾಡುವವರು ಯಾರು?”
قُلۡ هُوَ ٱلرَّحۡمَٰنُ ءَامَنَّا بِهِۦ وَعَلَيۡهِ تَوَكَّلۡنَاۖ فَسَتَعۡلَمُونَ مَنۡ هُوَ فِي ضَلَٰلٖ مُّبِينٖ
ಹೇಳಿರಿ: “ಅವನು ಪರಮ ದಯಾಳು. ನಾವು ಅವನಲ್ಲಿ ವಿಶ್ವಾಸವಿಟ್ಟಿದ್ದೇವೆ ಮತ್ತು ಅವನಲ್ಲಿ ಭರವಸೆಯಿಟ್ಟಿದ್ದೇವೆ. ಸ್ಪಷ್ಟ ದುರ್ಮಾರ್ಗದಲ್ಲಿರುವುದು ಯಾರೆಂದು ನೀವು ಸದ್ಯವೇ ತಿಳಿಯುವಿರಿ.”
قُلۡ أَرَءَيۡتُمۡ إِنۡ أَصۡبَحَ مَآؤُكُمۡ غَوۡرٗا فَمَن يَأۡتِيكُم بِمَآءٖ مَّعِينِۭ
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮ ನೀರು ಭೂಮಿಯಲ್ಲಿ ಆಳಕ್ಕೆ ಇಂಗಿದರೆ, ನಿಮಗೆ ಹರಿಯುವ ನೀರನ್ನು ತಂದುಕೊಡುವವನು ಯಾರು?”
مشاركة عبر